ಲೇಖನಗಳು

ಅಭಿವೃದ್ಧಿ ಯೋಜನೆ-ಪ್ರಭುತ್ವದ ಆಲೋಚನೆ

ದಿಲ್ಲಿ ವಿಶ್ವವಿದ್ಯಾಲಯದ ಇತಿಹಾಸದ ಆನರ್ಸ್‌ ವಿದ್ಯಾರ್ಥಿಗಳಿಗೆ ಶಿಫಾರಸು ಮಾಡಲಾಗಿರುವ ಪಠ್ಯಗಳಲ್ಲಿ ಎ.ಕೆ.ರಾಮಾನುಜನ್‌ ಬರೆದಿರುವ `ತ್ರೀ ಹಂಡ್ರೆಡ್‌ ರಾಮಾಯಣಾಸ್‌-ಫೈವ್‌ ಎಗ್ಸಾಂಪಲ್ಸ್‌ ಅಂಡ್‌ ತ್ರೀ ಥಾಟ್ಸ್‌ ಆನ್‌ ಟ್ರಾನ್‌ಸ್ಲೇಷನ್‌' ಎಂಬ ಪ್ರಬಂಧವೂ ಒಂದು. ಇದು ಇತಿಹಾಸ ಪಠ್ಯದಲ್ಲಿ ಇರಕೂಡದು ಎಂದು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನ ಕಾರ್ಯಕರ್ತರು ವಿಶ್ವವಿದ್ಯಾಲಯದಲ್ಲಿ ಗದ್ದಲವೆಬ್ಬಿಸಿದರು. ವಿಭಾಗ ಮುಖ್ಯಸ್ಥರನ್ನು ಎಳೆದಾಡಿದರು. ಪುಸ್ತಕವನ್ನು ಹರಿದು ಹಾಕಿದರು. ಇದಕ್ಕೆ ಕನ್ನಡ ಸಾಹಿತ್ಯಿಕ ಲೋಕದಿಂದ ಬಂದ ಪ್ರತಿಕ್ರಿಯೆ ಬಹುತೇಕ ಶೂನ್ಯ. ರಾಮಾನುಜನ್‌ ನಮ್ಮವರು, ಕನ್ನಡದವರು ಎಂಬ ಕಾರಣಕ್ಕಾದರೂ ಅವರ ಪುಸ್ತಕವನ್ನು ಹರಿದುದಕ್ಕೆ ಕನ್ನಡಾಭಿಮಾನಿಗಳಿಗೆ ಸಿಟ್ಟು ಬರಬೇಕಿತ್ತು. ಅದೂ ಸಂಭವಿಸಲಿಲ್ಲ. ಇದೇಕೆ ಹೀಗಾಯಿತು? ಬಹುಶಃ ನಾವು ಇಂಥ ವರ್ತನೆಗಳಿಗೆ ಒಪ್ಪಿಗೆ ಕೊಡಲು ಆರಂಭಿಸಿದ್ದೇವೆ ಅನ್ನಿಸುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂಥದ್ದು ತುಂಬಾ ನಡೆಯುತ್ತಿದೆ. ರಾಜಶೇಖರ್‌, ಫಣಿರಾಜ್‌, ಪಟ್ಟಾಭಿಯಂಥ ಕೆಲವರು ಇಂಥದ್ದನ್ನು ವಿರೋಧಿಸುತ್ತಿದ್ದಾರೆ. ಮತ್ತು ಕೆಲವೇ ಕೆಲವು ಸಂಘಟನೆಗಳು ಇದನ್ನು ಬೆಂಬಲಿಸುತ್ತಿವೆ. ಈ ಬಗೆಯ ಹೋರಾಟಗಳೆಲ್ಲಾ ಹಾಸ್ಯಾಸ್ಪದವಾಗಿ ಕಾಣಿಸುವಂಥ ಒಂದು ಕಾಲವೂ ಹತ್ತಿರದಲ್ಲೇ ಇರಬಹುದೇನೋ ಎಂಬ ಭಯ ನನ್ನನ್ನು ಆವರಿಸುತ್ತಿದೆ. ಕಾಫ್ಕಾನ ಬರೆಹದಲ್ಲಿ ಒಬ್ಬ ಹಂಗರ್‌ ಆರ್ಟಿಸ್ಟ್‌ ಇದ್ದಾನೆ. ಊರಿಗೆ ಬಂದವರೆಲ್ಲಾ ಅವನನ್ನು ಹೋಗಿ ನೋಡಿ ಬರುತ್ತಿರುತ್ತಾರೆ. ಅಂದರೆ ಅವನೊಬ್ಬ ಪ್ರೇಕ್ಷಣೀಯ ವ್ಯಕ್ತಿ ಆಗಿಬಿಟ್ಟಿರುತ್ತಾನೆ. ನಮ್ಮ ಹೋರಾಟಗಳಿಗೆ, ಹೋರಾಟಗಾರರಿಗೆ ಈ `ಪ್ರೇಕ್ಷಣೀಯ ಸ್ಥಿತಿ' ಬರಬಾರದು ಎಂಬುದು ಲಂಕೇಶ್‌ ಹುಟ್ಟಿದ ದಿನ ನಾವು ಆಡಲೇಬೇಕಾದ ಮಾತು. ಇದನ್ನೇ ಹಿನ್ನೆಲೆಯಾಗಿಟ್ಟುಕೊಂಡು ರಾಜಕೀಯಕ್ಕೆ ಸಂಬಂಧಿಸಿದ ಕೆಲವು ಟಿಪ್ಪಣಿಗಳನ್ನು ಮುಂದಿಡುತ್ತಿದ್ದೇನೆ..  read more »

ಹೊಸ ಸರ್ಕಾರಕ್ಕೆ ಎರಡಂಶದ ಕಾರ್ಯಸೂಚಿ

ನಮ್ಮ ಎಲ್ಲ ಮಾಧ್ಯಮಗಳಲ್ಲೂ ಜನತಾದಳವು (ಜೆಡಿಎಸ್) ಭಾರತೀಯ ಜನತಾಪಕ್ಷಕ್ಕೆ ಅಧಿಕಾರವನ್ನು “ಹಸ್ತಾಂತರ” ಮಾಡುವುದೆಂದು ಕೇಳಿ ಕೇಳಿ ನಾವೆಲ್ಲರೂ ಒಂದು ಸುಳ್ಳಿನಲ್ಲಿ ಪಾಲುದಾರರಾಗುವಂತೆ ಆಗಿದೆ. ನಿಜಕ್ಕೂ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಬಿಜೆಪಿಯೂ ಅಧಿಕಾರದಲ್ಲಿ ಇತ್ತು. ಮುಖ್ಯಮಂತ್ರಿಯ ಕೆಲಸ ಹೀಗೆ ಅಧಿಕಾರದಲ್ಲಿರುವ ಎರಡು ಪಕ್ಷಗಳನ್ನೂ ಪ್ರತಿನಿಧಿಸುವುದಲ್ಲದೆ ಇನ್ನೇನು ವೈಯಕ್ತಿಕವಾಗಿ ಹೆಚ್ಚಿನದನ್ನು ಮಾಡಬಹುದಾದ ಸ್ಥಾನ ಅದಲ್ಲ.  read more »

ಭಾರತದ ಏಕತೆಯಲ್ಲಿ ಪುರಾಣ ಮತ್ತು ಇತಿಹಾಸ

ಬಹಳ ಧರ್ಮಭೀರುವೂ ಸಂಪ್ರದಾಯಶೀಲರೂ ಆಗಿದ್ದ ನಮ್ಮ ಅಜ್ಜಯ್ಯ, ಅವರ ಇಡೀ ಜೀವಮಾನದಲ್ಲಿ ಒಂದೇಒಂದು ಸಲವೂ `ನಾನೊಬ್ಬ ಭಾರತೀಯ' ಎಂದಿರಲಾರರು.. ಇದೇನೇ ಇರಲಿ, `ಭಾರತ' ಎನ್ನುವ ಕಲ್ಪನೆ ಮೂಡಿಬಂದಿದ್ದೇ ಇಲ್ಲಿ ಹರಿಯುವ ನದಿಗಳಿಂದ. ಹೀಗಾಗಿಯೇ ಅಜ್ಜಯ್ಯ ನಮ್ಮ ಬಾವಿಯ ನೀರನ್ನು ಸೇದಿಕೊಂಡು ತಮ್ಮ ತಲೆಯ ಮೇಲೆ ಸುರಿದುಕೊಂಡು ಸ್ನಾನ ಮಾಡುತ್ತಿದ್ದಾಗ ತಪ್ಪದೆ, `ಗಂಗೇ ಚ ಯಮುನೇ ಚೈವ ಗೋದಾವರಿ ಸರಸ್ವತಿ/ನರ್ಮದಾ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು' ಎಂಬ ಮಂತ್ರ ಹೇಳುತ್ತಿದ್ದರು.  read more »

೨೦೬೭ರಲ್ಲಿ ಭಾರತ

ಸಸ್ಯಾಹಾರಿಯೂ, ಅಹಿಂಸೆಯ ಪ್ರತಿಪಾದಕರೂ ಆಗಿದ್ದ ಕಳೆದ ಶತಮಾನದ ಮೋಹನ ದಾಸ ಗಾಂಧಿ ಮನುಷ್ಯರ ಹೃದಯ ಪರಿವರ್ತನೆ ಕೂಡ ಸಾಧ್ಯ ಎಂದು ನಂಬಿದ್ದಂಥವರು. ಇಂಥ ಗಾಂಧೀಜಿಯನ್ನು ಬಹಳ ಹಿಂದೆ ಪತ್ರಕರ್ತನೊಬ್ಬ'`ಪಾಶ್ಚಾತ್ಯ ದೇಶಗಳ ಆಧುನಿಕ ನಾಗರಿಕತೆ ಬಗ್ಗೆ ನಿಮಗೇನನಿಸುತ್ತೆ?' ಎಂದು ಪ್ರಶ್ನಿಸಿದ್ದ. ಅದಕ್ಕೆ ಗಾಂಧೀಜಿ ಕುಶಾಲಿನ ವ್ಯಂಗ್ಯದಲ್ಲಿ `ಇದೊಂದು ಒಳ್ಳೆಯ ಕಲ್ಪನೆ....' ಎಂದು ಉತ್ತರಿಸಿದ್ದರು.  read more »

ಮಾತು ಸೋತ ಭಾರತ

ನನ್ನ ಅಜ್ಜ ಸ್ವಾತಂತ್ರ್ಯಪೂರ್ವ ಕಾಲದಲ್ಲೇ ಮುದುಕರಾದವರು. ವಯಸ್ಸಾದರೂ ದೃಷ್ಟಿಯನ್ನೂ ಹಲ್ಲನ್ನೂ ಮೈಲುಗಟ್ಟಲೆ ಬರಿಗಾಲಲ್ಲಿ ಕಾಡುದಾರಿಯಲ್ಲಿ ನಡೆದಾಡುವ ಶಕ್ತಿಯನ್ನೂ ಸಾಯುವತನಕ- ಅಂದರೆ, ಬಚ್ಚಲೆ ಒಲೆಯೆದುರು ಮೈಕಾಯಿಸಿಕೊಳ್ಳುತ್ತ ಕೂತಿರುವಂತೆಯೇ ಕಣ್ಣು ಮುಚ್ಚುವತನಕ-ಪಡೆದವರೆಂದು ನೆನಪಾಗುವ ಈ ನನ್ನ `ಅಜ್ಜಯ್ಯ' ಅಂಗಿ ಹಾಕದ ಅಪ್ಪಟ ವೈದಿಕರು. ಅವರನ್ನೊಂದು ಪಾಪಭಾವನೆ ಕಾಡಿರಬಹುದೆ? ಒಲೆ ಹತ್ತಿಸಲು ಕಾಡಿಂದ ಜಿಗ್ಗು ತರುವಾಗ ನನ್ನ ಹತ್ತಿರ ಪಟ್ಟಂಗ ಹೊಡೆಯುತ್ತ ಇದ್ದ ಈ ಅಜ್ಜಯ್ಯ ಹೇಳಿದ ಮಾತೊಂದು ನೆನಪಾಗುತ್ತ ಇರುತ್ತದೆ  read more »

ವಿಸ್ಮಯ ದರ್ಶನದ ತೇಜಸ್ಸು

ತೇಜಸ್ವಿ ಅವರ ಕಾಲೇಜು ದಿನಗಳಿಂದಲೂ ನನಗೆ ಪರಿಚಯ. ನಾನಾಗ ಶಿವಮೊಗ್ಗದಲ್ಲಿ ಮೇಷ್ಟ್ರು. ವಯಸ್ಸು ಇಪ್ಪತ್ತಮೂರೋ ಇಪ್ಪತ್ತನಾಲ್ಕೋ ಇರಬೇಕು. ಕಾಟನ್‌ ಸೂಟ್‌ ಹಾಕ್ಕೊಂಡು ಶೋಕಿಯಿಂದ ನಾನು ಕಾಲೇಜಿಗೆ ಹೋಗ್ತಿದ್ದೆ.  read more »

ರಾಜಕೀಯದ ಪತನ

ಮಾಡಿದವರ ಪಾಪ ಆಡಿದವರ ಬಾಯಲ್ಲಿ ಎನ್ನುತ್ತಾರೆ. ಈಗಿನ ರಾಜಕಾರಣ ಹೊಲಸಾಗಿದೆ ಎಂದು ಹೇಳಲು ಹೊರಟಿದ್ದೇ ನನಗೆ ಈ ಗಾದೆ -ನಾನು ಈಗ ಮಾತನ್ನಾಡುತ್ತಿರುವುದರ ಬಗ್ಗೆ ಕೂಡ- ಸತ್ಯವೆನ್ನಿಸಿತು. ಸದ್ಯ ಆಗುತ್ತಿರುವುದಕ್ಕೆ ನಾವೆಲ್ಲರೂ ಒಂದಲ್ಲ ಒಂದು ಬಗೆಯಲ್ಲಿ ಪಾಲುದಾರರು ಎಂದು ತಿಳಿದು ಮಾತನ್ನಾಡಲು ಪ್ರಯತ್ನಿಸುವುದು ಸಾಧ್ಯವೆ ನೋಡುವೆ.  read more »

Syndicate content